Friday, January 16, 2026
HomePopularಅತಿ ಮಳೆಯಿಂದ ಹಾನಿಗಿಡಾದ ಮನೆಗೆ ಸಚಿವ ಈಶ್ವರ ಬಿ. ಖಂಡ್ರೆ ಭೇಟಿ

ಅತಿ ಮಳೆಯಿಂದ ಹಾನಿಗಿಡಾದ ಮನೆಗೆ ಸಚಿವ ಈಶ್ವರ ಬಿ. ಖಂಡ್ರೆ ಭೇಟಿ

ಅತಿ ಮಳೆಯಿಂದ ಹಾನಿಗಿಡಾದ ಮನೆಗೆ ಸಚಿವ ಈಶ್ವರ ಬಿ. ಖಂಡ್ರೆ ಭೇಟಿ

ಬೀದರ್ : ಬೀದರ ನಗರದ ವಿದ್ಯಾನಗರ ಕಾಲೋನಿಯ 11ನೇ ರಸ್ತೆಯಲ್ಲಿರುವ ಕಲ್ಪನಾ ಗಂಡ ಸುನೀಲಕುಮಾರ ರೆಡ್ಡಿ ಅವರ ಮನೆಯು ಅತಿ ಮಳೆಯಿಂದ ಹಾನಿಗಿಡಾಗಿದ್ದು, ವಿಷಯ ತಿಳಿದ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಹಾನಿಗಿಡಾದ ಮನೆಗೆ ಭೇಟಿ ನೀಡಿದರು.

ಹಾನಿಯಾದವರ ಕುಟುಂಬಕ್ಕೆ ಸಚಿವರು ವೈಯಕ್ತಿಕವಾಗಿ 15 ಸಾವಿರ ಹಾಗೂ ಜಿಲ್ಲಾಡಳಿತದಿಂದ 25 ಸಾವಿರ ರೂಪಾಯಿ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ನಗರಸಭೆ ಆಯುಕ್ತ ಶಿವರಾಜ ರಾಥೋಡ್, ಬೀದರ ಸಹಾಯಕ ಆಯುಕ್ತ ಮೊಹಮದ್ ಶಕೀಲ್, ಬೀದರ ತಾಲೂಕಿನ ತಹಸಿಲ್ದಾರ್ ಸೇರಿದಂತೆ ಇತರೆ ಉಪಸ್ಥಿತರಿದ್ದರು.
****

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3