Friday, January 16, 2026
HomePopularರಸ್ತೆ ಅಭಿವೃದ್ಧಿಪಡಿಸುವ 6.90 ಕೋಟಿ ರೂ. ಕಾಮಗಾರಿಗೆ ಸಚಿವರಿಂದ ಭೂಮಿಪೂಜೆ

ರಸ್ತೆ ಅಭಿವೃದ್ಧಿಪಡಿಸುವ 6.90 ಕೋಟಿ ರೂ. ಕಾಮಗಾರಿಗೆ ಸಚಿವರಿಂದ ಭೂಮಿಪೂಜೆ

ರಸ್ತೆ ಅಭಿವೃದ್ಧಿಪಡಿಸುವ 6.90 ಕೋಟಿ ರೂ.
ಕಾಮಗಾರಿಗೆ ಸಚಿವರಿಂದ ಭೂಮಿಪೂಜೆ
ಬೀದರ್ :  ಭಾಲ್ಕಿ ತಾಲೂಕಿನ ಹರಣಾಳ–ಡಾವರಗಾವ್ ಮಾರ್ಗವಾಗಿ ಕುರುಬಖೇಳ್ಗಿ ಗ್ರಾಮದವರೆಗೆ ಸುಮಾರು ₹6.90 ಕೋಟಿ ರೂ. ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಇಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತç ಸಚಿವರು ಹಾಗೂ ಬಿದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಅವರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಗ್ರಾಮೀಣ ಭಾಗದ ಜನಜೀವನ ಸುಲಭವಾಗಬೇಕಾದರೆ ಉತ್ತಮ ರಸ್ತೆಗಳ ಅಗತ್ಯವಿದೆ. ಈ ರಸ್ತೆ ಅಭಿವೃದ್ಧಿಯಿಂದ ಈ ಭಾಗದ ಜನರಿಗೆ ಉತ್ತಮ ಸಂಪರ್ಕ ಸೌಲಭ್ಯ ಒದಗಲಿದ್ದು, ಇದು ಶಿಕ್ಷಣ, ಆರೋಗ್ಯ ಹಾಗೂ ಆರ್ಥಿಕ ಚಟುವಟಿಕೆಗಳ ಪ್ರಗತಿಗೆ ಸಹಕಾರಿಯಾಗಲಿದೆ,” ಎಂದು ಹೇಳಿದರು.

“ಭಾಲ್ಕಿ ತಾಲೂಕಿನಲ್ಲಿ ರಸ್ತೆ ಅಭಿವೃದ್ಧಿ ಕಾರ್ಯದಲ್ಲಿ ನಿರಂತರ ಬದಲಾವಣೆ ಆಗುತ್ತಿದ್ದು, ಇದನ್ನು ಮತ್ತಷ್ಟು ವೇಗವಾಗಿ ಮುಂದುವರೆಸಲಾಗುವುದು. ಗ್ರಾಮೀಣ ಪ್ರದೇಶಗಳ ಸಂಪರ್ಕ ಸುಧಾರಣೆ ನಮ್ಮ ಪ್ರಾಥಮಿಕ ಗುರಿಯಾಗಿದ್ದು, ಇದಕ್ಕಾಗಿ ಸರ್ಕಾರ ಬದ್ಧವಾಗಿದೆ,” ಎಂದರು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
*****
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3