ಇತ್ತೀಚಿನ ದಿನಗಳಲ್ಲಿ ನಮ್ಮ ಪೂರ್ವಜರ ಸಂಸ್ಕೃತಿ ನಶಿಸಿ ಹೋಗುತ್ತಿರುವುದು ದುರದೃಷ್ಟಕರ. ಇಂದಿನ ತರಣರು ನಮ್ಮ ಮೂಲ ಸಂಸ್ಕೃತಿಯನ್ನೇ ಮರೆಯುತ್ತಿದ್ದಾರೆ. ಸಾಹಿತಿಗಳು, ಕವಿಗಳು ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸಬೇಕು.ಮುಂದಿನ ಜನಾಂಗಕ್ಕೆ ಈ ಪರಂಪರೆ ಮುಂದುವರೆಯಬೇಕು. ಕವಿಗಳು ತಮ್ಮ ಕವಿತೆಗಳಲ್ಲಿ ನಾಡಿನ ಸಂಸ್ಕೃತಿಯನ್ನು ಬಿಂಬಿಸಬೇಕು. ನಮ್ಮ ಕವಿಗಳು ಸಾಂಸ್ಕೃತಿಕ ರಾಯಭಾರಿಗಳಾಗಬೇಕೆಂದರು. ಅವರು ಕಿತ್ತೂರ ರಾಣಿ ಚನ್ನಮ್ಮ ರಾಣಿ ವೃತದ ಹತ್ತಿರವಿರುವ ಮಹಾಲಕ್ಷ್ಮೀ ಸಭಾಂಗಣದಲ್ಲಿ ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಎಂ.ಜಿ.ದೇಶಪಾಂಡೆ ಮತ್ತು ಕುಮಾರಿ ಪ್ರಿಯದರ್ಶಿನಿ ಅವರ ಜನ್ಮದಿನಾಚರಣೆ ಹಾಗೂ ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಯುಗಾದಿ ಕವಿಗೋಷ್ಠಿ , ಪ್ರಶಸ್ತಿ ಪ್ರದಾನ ಹಾಗೂ ಹಾಸ್ಯ, ಸಂಗೀತ ಕಾರ್ಯಕ್ರಮ ದ ವೇದಿಕೆಯಲ್ಲಿ ಮಾತನಾಡಿದರು. ಕವಿತೆಗಳಲ್ಲಿ ಸಂದೇಶವಿರಬೇಕೆಂದರು.
ಕವಿ ಕವಯಿತ್ರಿಯರು ಹೆಚ್ಚಿನ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ದ.ರಾ. ಬೇಂದ್ರೆ, ಕುವೆಂಪು ರವರ ಕವಿತೆಗಳು ಓದುವ ಮೂಲಕ ಅತ್ಯುತ್ತಮ ಕವಿತೆಗಳನ್ನು ಬರೆಯಬೇಕು ಎಂದು ಡಾ. ಜಗದೇವಿ ತಿಬಶೆಟ್ಟಿಯವರು ತಮ್ಮ ಆಶಯ ನುಡಿಗಳನ್ನು ವ್ಯಕ್ತಪಡಿಸಿದರು. ಆಳವಾದ ಅಧ್ಯಯನ ಹಾಗೂ ಅನುಭವಗಳಿಂದ ಸೊಗಸಾದ ಕಾವ್ಯಗಳು ರಚನೆ ಮಾಡಬೇಕು. ಜವಾಬ್ದಾರಿಯುತವಾಗಿ ಕಾವ್ಯಗಳು ರಚಿಸಬೇಕು ಎಂದು ವೇದಿಕೆಯಲ್ಲಿ ಕವಿಗೋಷ್ಠಿಯ ಅಧ್ಯಕ್ಷಸ್ಥಾನವನ್ನು ವಹಿಸಿರುವಂತಹ ಶ್ರೀಮತಿ ಪುಣ್ಯವತಿ ವಿಸಾಜಿಯವರು ಕವಿಗಳಿಗೆ ಮಾರ್ಗದರ್ಶನ ಮಾಡಿದರು. ರಘುಶಂಖ ಭಾತಂಬ್ರಾ ಅವರು ಎಂ.ಜಿ.ದೇಶಪಾಂಡೆಯವರ ಬದುಕು ಬರಹ ಕುರಿತು ಉಪನ್ಯಾಸ ನೀಡಿದರು. ವಿಜಯಕುಮಾರ್ ಸೋನಾರೆ, ಶಂಭುಲಿಂಗ ವಾಲ್ದೊಡ್ಡಿ, ವಿಶ್ವನಾಥ ಮುಕ್ತಾ, ವೀರಭದ್ರಪ್ಪ ಉಪ್ಪಿನ್ ,ಮೋಹನ ಪಾಟೀಲ್ ಮನ್ನಳ್ಳಿ ಎಂ.ಜಿ.ದೇಶಪಾಂಡೆ ಅವರು ತಮ್ಮ ತಮ್ಮ ವಿಚಾರಗಳನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ರೇಖಾ ಸೌದಿಯವರಿಗೆ “ಗಾಯಕಿ ಲತಾ ಮಂಗೇಶ್ಕರ್ ಪ್ರಶಸ್ತಿ” ಮತ್ತು ಸಮಾಜ ಸೇವಕರಾದ ಸಂಗಮೇಶ ಬಿರಾದಾರ ಅವರಿಗೆ “ಸಮಾಜ ಚೂಡಾಮಣಿ ರತ್ನ ಪ್ರಶಸ್ತಿ”ಗಳನ್ನು ಪ್ರದಾನ ಮಾಡಲಾಯಿತು.
ಬಸವರಾಜ ದಯಾಸಾಗರ, ಜಗದೇವಿ ದುಬುಲಗುಂಡೆ, ರೂಪಾ ಪಾಟೀಲ, ಮಾಧುರಿ ಕುಲಕರ್ಣಿ, ಮಲ್ಲಿಕಾರ್ಜುನ ಸ್ವಾಮಿ ಸಂಗಮ, ಡಾ ಸುಜಾತಾ ಹೊಸಮನಿ, ಅರವಿಂದ ಕುಲಕರ್ಣಿ, ಸಂಗಮೇಶ್ವರ ಜ್ಯಾಂತೆ, ರವಿದಾಸ್ ಕಾಂಬಳೆ, ಪ್ರಭು ಮಾಲೆ, ಸಂಗೀತಾ ಕಾಂಬಳೆ, ವೀರೇಶ್ವರಿ ಮೂಲಗೆ, ಚಂದ್ರಶೇಖರ ಸಿಂಧೆ ಇವರುಗಳು ತಮ್ಮ ತಮ್ಮ ಕವನಗಳನ್ನು ವಾಚನಮಾಡಿದರು. ಪ್ರಕಾಶ ಕುಲಕರ್ಣಿ ಮುಗನೂರು ಹಾಸ್ಯ ನಡೆಸಿಕೊಟ್ಟರು. ಕರಬಸಪ್ಪ ವಿಶ್ವಕರ್ಮ, ಮಲ್ಲಿಕಾರ್ಜುನ ರಾಂಪುರೆ, ಬಸವರಾಜ ಯರನಳ್ಳಿ, ಪವನ ಗೌಡ, ಜಾನಪದ ಗಂಗಮ್ಮ, ರಾಂಪುರೆ ಅಕ್ಕನ ಬಳಗದ ಮಹಿಳೆಯರು ಜಾನಪದ, ಭಾವಗೀತೆಗಳು ಸೇರಿದಂತೆ ತಮ್ಮ ತಮ್ಮ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಪ್ರಾರಂಭದಲ್ಲಿ ಆಸ್ತಾ ಬಚ್ಚನ್ ಬಾಲಕಿ ನೃತ್ಯ ನಡೆಸಿಕೊಟ್ಟರು. ಪ್ರೇಮಾ ಅವಿನಾಶ ಸ್ವಾಗತ ಕೋರಿದರು. ಶಿಲ್ಪಾ ರಾಯವಾಡೆ ಪ್ರಾರ್ಥನೆ ಗೀತೆ, ಪುಷ್ಪಾ ಪಾಟೀಲ್ ಸಂಗಡಿಗರು ನಾಡಗೀತೆ ನಡೆಸಿಕೊಟ್ಟರು. ಯೋಗೇಂದ್ರ ಯದಲಾಪೂರೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಲ್ಪಾ ಮಜಗೆ ಕಾರ್ಯಕ್ರಮವನ್ನು ನಿರೂಪಿಸಿದರು. ಅಂಕಿತಾ ಬಚ್ಚನ, ಆರ್ ಎಸ್ ಬಿರಾದಾರ, ಜಗನ್ನಾಥ ಯರ್ನಳ್ಳಿ ಮಹೇಶ್ ಕುಮಾರ ಮಜಗೆ, ಸುಧಾಕರ ಯರನಳ್ಳಿ, ಶಿವರಾಜ್ ಕಾಳಶೆಟ್ಟಿ, ರಮೇಶ ಇಟಗೆ, ಸುರೇಶ್ ಬಾಬು, ಬಸವರಾಜ ಮೂಲಗೆ, ರೇವಣಪ್ಪ ಮೂಲಗೆ ಸೇರಿದಂತೆ ನೂರಾರು ಗಣ್ಯರು ಮತ್ತು ಮಹಿಳೆಯರು ಹಾಜರಿದ್ದರು. ಬಾಬುರಾವ ಗೊಂಡಾ ಕಾರ್ಯಕ್ರಮಕ್ಕೆ ವಂದಿಸಿದರು.
——————–