Friday, January 16, 2026
HomePopularದಾದಿ ಪ್ರಕಾಶಮಣಿ ಸ್ಮರಣಾರ್ಥ: ಬಿ.ಕೆ ಶಿವಶಕ್ತಿ ಭವನದಲ್ಲಿ ರಕ್ತದಾನ ಶಿಬಿರ

ದಾದಿ ಪ್ರಕಾಶಮಣಿ ಸ್ಮರಣಾರ್ಥ: ಬಿ.ಕೆ ಶಿವಶಕ್ತಿ ಭವನದಲ್ಲಿ ರಕ್ತದಾನ ಶಿಬಿರ

ದಾದಿ ಪ್ರಕಾಶಮಣಿ ಸ್ಮರಣಾರ್ಥ: ಬಿ.ಕೆ ಶಿವಶಕ್ತಿ ಭವನದಲ್ಲಿ ರಕ್ತದಾನ ಶಿಬಿರ
ಬೀದರ್ : ರಾಜಯೋಗಿನಿ ದಾದಿ ಪ್ರಕಾಶಮಣಿಯವರ 18ನೇ ಸ್ಮರಣಾರ್ಥ ನಗರದ ರಾಂಪುರೇ ಕಾಲೊನಿಯ ಬ್ರಹ್ಮಾಕುಮಾರಿ *“ಶಿವಶಕ್ತಿ ಭವನ”*ದಲ್ಲಿ ಸೋಮವಾರ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ವಿಶ್ವ ಬಂಧುತ್ವ ದಿನಾಚರಣೆ ಹಾಗೂ ಮಹಾ ರಕ್ತದಾನ ಶಿಬಿರ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಬ್ರಹ್ಮಾಕುಮಾರೀಸ್ ಕೇಂದ್ರದ ಸಂಚಾಲಕಿ ಬಿ.ಕೆ. ಸುನಂದಾ ಬೆಹೆನ್‌ಜಿ ಅವರು ಮಾತನಾಡಿ, ದಾದಿ ಪ್ರಕಾಶಮಣಿಯವರ ಜೀವನ, ಸೇವಾ ಚಟುವಟಿಕೆಗಳು ಹಾಗೂ ವಿಶ್ವಮಟ್ಟದಲ್ಲಿ ಬ್ರಹ್ಮಾಕುಮಾರೀಸ್ ಸಂಸ್ಥೆಯ ವಿಸ್ತರಣೆಯ ಕುರಿತು ಸ್ಮರಿಸಿದ್ದರು. ಅವರು 1922ರಲ್ಲಿ ಜನಿಸಿದ್ದು, 1969ರಲ್ಲಿ ಬ್ರಹ್ಮಾ ಬಾಬಾ ಅವರು ತಮ್ಮ ಶಕ್ತಿಯನ್ನು ದಾದಿ ಪ್ರಕಾಶಮಣಿಗೆ ಅರ್ಪಿಸಿದ ನಂತರ ಜಗತ್ತಿನಾದ್ಯಂತ ಸೇವಾಕಾರ್ಯದಲ್ಲಿ ಅವರು ಅಜರಾಮರರಾಗಿದ್ದರು ಎಂದು ಹೇಳಿದರು.

ಜಗತ್ತಿನ 140ಕ್ಕೂ ಹೆಚ್ಚು ದೇಶಗಳಲ್ಲಿ ಇಂದು ಸುಮಾರು 50 ಸಾವಿರ ಬಿ.ಕೆ. ಸಹೋದರಿಯರು ಹಾಗೂ 5,000ಕ್ಕೂ ಅಧಿಕ ಸಹೋದರರು ನಿಸ್ವಾರ್ಥ ಸೇವೆಯಲ್ಲಿ ನಿರತರಾಗಿದ್ದಾರೆಂದು ವಿವರಿಸಿದರು. ಈ ತಿಂಗಳ 22ರಿಂದ 25ರ ವರೆಗೆ ಭಾರತ ಹಾಗೂ ನೇಪಾಳದ 6,000ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಮಹಾ ರಕ್ತದಾನ ಅಭಿಯಾನ ನಡೆಯುತ್ತಿರುವುದನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ತೆಲಂಗಾಣ ಸಂಗಾರೆಡ್ಡಿ ಬ್ರಹ್ಮಾಕುಮಾರಿ ಕೇಂದ್ರದ ರೆಡ್ಡಿ ಸಂಚಾಲಕಿ ಬಿ.ಕೆ. ಸುಮಂಗಲಾ ಬಹೆನಜಿ ಅವರು ಮಾತನಾಡಿ ಸಂಗಾರೆಡ್ಡಿಯಲ್ಲಿ ಬ್ರಹ್ಮಾ ಬಾಬಾ ಅವರ ಕೇಂದ್ರ ನಿರ್ಮಾಣ ಮಾಡಬೇಕಿತ್ತು ತಮ್ಮ ಶುಭ ಕಾಮನೆ ಬೇಕೆಂದು ಕೇಳಿದಾಗ ಖಂಡಿತ್ತಾ ಆಗುತ್ತದೆ ಎಂದು ಭರವಸೆ ನೀಡಿದ್ದರು, ಅವರ ದೈವಿ ಶಕ್ತಿಯಿಂದ ಸಂಗಾರೆಡ್ಡಿಯಲ್ಲಿ ಬ್ರಹ್ಮಾಕುಮಾರಿ ಕೇಂದ್ರ ಸ್ಥಾಪನೆ ಜೋತೆಗೆ ಬೀದರ ತಾಲೂಕಿನ ಯೆದಲಾಪೂರ ಗ್ರಾಮದ ಹತ್ತಿರ ಸುಮಾರ 15 ಎಕರೆ ಜಮಿನಿನಲ್ಲಿ ವಿಸ್ತಾರವಾಗಿ ನಿರ್ಮಾಣಗೊಳ್ಳುತ್ತಿರುವ ರಿಟ್ರೀಟ್ ಕೇಂದ್ರ ಸ್ಥಾಪನೆ ಆಗಲು ದಾದಿಯವರ ದಿವ್ಯ ಶಕ್ತಿ ಗುಲ್ಜಾರ ದಾದಿ ಹಾಗೂ ಜಾನಕಿ ದಾದಿಯವರ ಪ್ರೇರಣಾ ಶಕ್ತಿಯಿಂದ ಸಾದ್ಯವಾಯಿತು ಎಂದು ತಿಳಿಸಿದ್ದರು.

ಕಾರ್ಯಕ್ರಮದಲ್ಲಿ ಬುಡಾ ಅಧ್ಯಕ್ಷ ಬಸವರಾಜಟ್ಟಿ, ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟ್ಕರ್, ಉದ್ಯಮಿ ರಮೇಶ್ ಗೋಯಲ್, ಡಾ. ನಾಗೇಶ್ ಪಾಟೀಲ್, ಬಿ.ವಿ. ಬೋಮರೆಡ್ಡಿ ಕಾಲೇಜಿನ ಪ್ರಾಚಾರ್ಯ ಡಾ. ಪಿ. ವಿಟ್ಟಲ್ ರೆಡ್ಡಿ, ಹಿರಿಯ ಪತ್ರಕರ್ತ ಶಿವಶರಣಪ್ಪಾ ವಾಲಿ, ಶಿವಕುಮಾರ ಸ್ವಾಮಿ, ಆದೀಶ ವಾಲಿ,  ಪ್ರಭೂಶೆಟ್ಟಿ, ಕಾಶಿನಾಥ ಕೊಂಡಾ, ಬಾಪೂ ರೆಡ್ಡಿ  ಹಾಗೂ ಅನೇPರು ಉಪದ್ಥಿತರಿದ್ದರು.
ಈ ಸಂದರ್ಭದಲ್ಲಿ ಹಲವರು ರಕ್ತದಾನ ಮಾಡಿದ್ದರು, ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕೇಂದ್ರದ ಹಿರಿಯ ರಾಜಯೊಗ ಶಿಕ್ಷಕಿ ಬಿ.ಕೆ.ಪಾರ್ವತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದ್ದರು.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3