ಹಲಬರ್ಗಾ: ರಸಗೊಬ್ಬರ ವಿತರಣೆಗೆ ಚಾಲನೆ
ಬೀದರ್: ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರಸಗೊಬ್ಬರ ವಿತರಣೆಗೆ ಈಚೆಗೆ ಚಾಲನೆ ನೀಡಲಾಯಿತು.
ಸಂಘದಿಂದ ರೈತರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ರಸಗೊಬ್ಬರ ವಿತರಿಸಲಾಗುತ್ತಿದ್ದು, ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ರಸಗೊಬ್ಬರ ವಿತರಣೆಗೆ ಚಾಲನೆ ನೀಡಿದ ಸಂಘದ ಅಧ್ಯಕ್ಷ ಗೋವಿಂದ್ಸಿಂಗ್ ಠಾಕೂರ್ ಹೇಳಿದರು.
ಸಂಘದ ನಿರ್ದೇಶಕರಾದ ಬಸವರಾಜ ಮೂಲಗೆ, ಬ್ರಿಜ್ಪಾಲ್ಸಿಂಗ್ ಠಾಕೂರ್, ಸೋಮನಾಥ ಬಿರಾದಾರ, ಸಂತೋಷ್ ಪಾಟೀಲ ತೇಗಂಪುರ, ಜಗದೀಶ್ ಕೆಪ್ಟೆ, ಮಾಜಿ ನಿರ್ದೇಶಕ ಕಾಶಿನಾಥ ಕೆಪ್ಟೆ, ಕಾರ್ಯದರ್ಶಿ ಶಿವಕುಮಾರ ವಡ್ಡೆ, ಪ್ರಮುಖರಾದ ಧನರಾಜ ಸಜ್ಜನಶೆಟ್ಟಿ, ದೇವರಾಜ್ಸಿಂಗ್ ಠಾಕೂರ್, ರಾಮ ಸಿಂಗ್, ಇಂದಪ್ಪ ಬಿರಾದಾರ, ಸುಭಾಷ್ ಟಿಳ್ಳೆಕರ್, ಅಪ್ಪು ಮಡಿವಾಳ, ಯಲ್ಲಾಲಿಂಗ, ಜ್ಞಾನೇಶ್ವರ ಕುಪ್ಪೆ ಮತ್ತಿತರರು ಇದ್ದರು.