ಕಳ್ಳತನ ಪ್ರಕರಣದಲ್ಲಿ ಒಬ್ಬ ಆರೋಪಿ ಬಂಧನ: 6.37 ರೂ. ಮೌಲ್ಯದ ಸ್ವತ್ತು ಜಪ್ತಿ
ಬೀದರ್ : ಜಿಲ್ಲೆಯಲ್ಲಿ ನಡೆದ ಮನೆ ಕಳುವು ಪ್ರಕರಣವನ್ನು ಭೇದಿಸಿ ಒಬ್ಬ ಆರೋಪಿತನ್ನು ಬಂಧಿಸಿ ಆತನಿಂದ 6,37,500 ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧಕ್ಕೆ ನೀಡಲಾಗಿದೆ ಎಂದು ಬೀದರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪ್ರದೀಪ ಗುಂಟಿ ತಿಳಿಸಿದರು.
ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಸರಹದ್ದಿನಲ್ಲಿ ನಡೆದ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ ಆತನಿಂದ 30 ಗ್ರಾಮ ಬಂಗಾರದ ಬಿಸ್ಕೀಟ್ ಅ.ಕಿ. 2,40,000 ರೂ, 25 ಗ್ರಾಂ ಬಂಗಾರದ ಚಂಪಾಕಲಿ ಕೊರಳಿನ ಸರ ಅ.ಕಿ. 2,00,000 ರೂ., 12 ಗ್ರಾಂ ಬಂಗಾರದ ಲಾಕೇಟ್ ಅ.ಕಿ. 96,000 ರೂ., 05 ಗ್ರಾಂ. ಬಂಗಾರದ ಬೆರಳಿನ ಸುತ್ತುಂಗುರ ಅ.ಕಿ. 40,000 ರೂ., 03 ಗ್ರಾಂ ಬಂಗಾರದ ಪದಕ ಹಾಗೂ ಗುಂಡುಗಳು ಅ.ಕಿ. 24,000 ರೂ. ಹೀಗೆ ಒಟ್ಟು 7.5 ತೊಲೆ ಬಂಗಾರದ ಆಬರಣಗಳು ಅ.ಕಿ. 6,37,500 ರೂ. ಬೆಲೆಬಾಳುವ ಸ್ವತ್ತನ್ನು ಜಪ್ತಿ ಮಾಡಲಾಗಿದೆ ಎಂದರು. ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪಾಲ್ಗೊಂಡ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಪೊಲೀಸ್ ಅಧೀಕ್ಷಕರು ಪ್ರಶಂಸನೀಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಚಂದ್ರಕಾಂತ ಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.